'ಅಖಿಲ್, ಅಖಿಲ್..' ಎಂದು ಯಾರೊ ಕೂಗಿ ಭುಜವನ್ನು ಹಿಡಿದು ಎಬ್ಬಿಸಿದರು ಅಖಿಲನನ್ನು, ಅಖಿಲನು ಕಣ್ಬಿಟ್ಟು ನೋಡಿದಾಗ, ಡಾಕ್ಟರ್..!!! ಅವನ ತಾಯಿಯನ್ನು ನೋಡುತ್ತಿದ್ದವರು, ದಬಕ್ಕನೆ ಎದ್ದು ನಿಂತನು, ' ಕ್ಷಮಿಸಿ ಸರ್, ರಾತ್ರಿ ತಡವಾಗಿ ಬಂದೆ '
' ಪರ್ವಾಗಿಲ್ಲ, ಈಗ ತಾನೆ ವಾರ್ಡಗೆ ಹೋಗಿಬಂದೆ,' ಕಂಡೀಷನ್ ಹೇಗಿದೆ ಸರ್'
' ತುಂಬಾ ಕ್ರಿಟಿಕಲ್ ಆಗಿದೆ ಕಣಯ್ಯ, ನಿನಗೆ ಗೊತ್ತಿಲ್ಲದ್ದೇನಿದೆ ಹೇಳು, ಕೊನೆಯದಾಗಿ ಇವತ್ತು ಹೇಳ್ತಿನಿ ಸರಿಯಾಗಿ ಕೇಳಿಸಿಕೊ, ಇಂದು ಸಂಜೆ ಅಥವಾ ನಾಳೆ ಬೆಳಿಗ್ಗೆಯೊಳಗಾಗಿ ಆಪರೇಷನ್ ಮಾಡದೆ ಹೋದ್ರೆ ನಿಮ್ಮ ತಾಯಿನ ಉಳಿಸಿಕೊಳ್ಳೊದು ಕಷ್ಟ ಅಗುತ್ತೆ, ನಿನ್ನ ಕೈಲಿ ಅಷ್ಟೊಂದು ಹಣವಿಲ್ಲ ಅಂತಂದ್ರೆ, ಇವಾಗ್ಲೆ ಡಿಸ್ ಚಾರ್ಜ್ ಮಾಡಿಸಿಕೊಂಡು ಹೋಗಿಬಿಡು, ಕೊನೆಯ ದಿನಗಳನ್ನ ನಿಮ್ಮ ಮನೆಯಲ್ಲಾದರು ಕಳೆಯಲಿ, ಹ್ಞೂಂ ಅಂದ್ರೆ ಡಿಸ್ ಚಾರ್ಜ್ ಪಾರ್ಮನ್ನು ನರ್ಸ್ ಗೆ ಹೇಳಿ ರೆಡಿ ಮಾಡ್ಸಿಬಿಡ್ತೀನಿ, ಏನಂತೀಯಾ..?' ಡಾಕ್ಟರ್ ಅವರ ಮಾತುಗಳಿಂದ ಕುಸಿದು ಕುಳಿತ ಅಖಿಲನು, ' ಆ ಕೆಟ್ಟ ದಿನ ಇವತ್ತೆ ಬಂದು ಬಿಡ್ತಾ..?' ಎಂದು ಹಳಹಳಿಸತೊಡಗಿದನು.
' ಸರ್ ಆಪರೇಷನ್ ಮಾಡಿದ್ರೆ ಎಷ್ಟು ದಿನ ಬದುಕಬಹುದು'
' ನೋಡಯ್ಯ, ನಿಮ್ಮ ತಾಯಿಯವರ ಆರೋಗ್ಯ ನೋಡಿದ್ರೆ, ದೇಹವೆಲ್ಲ ಚೆನ್ನಾಗಿಯೆ ಇದೆ, ಆಪರೇಷನ್ ಮಾಡಿ, ಬದುಕುಳಿದ್ರೆ ಕನಿಷ್ಠ ಪಕ್ಷ ಒಂದು ಹತ್ತು ಹನ್ನೆರಡು ವರ್ಷ ಯಾವ ಚಿಂತೆಯಿಲ್ದೇನೆ ಬಾಳಬಹುದು, ಅದಕ್ಕೆಂದೆ ಕೆಲವು ಮೆಡಿಸನ್ಸ ಬರ್ತವೆ ಅವುಗಳನ್ನು ಕೊಡುತ್ತಾ ಹೋದರೆ ಶಿ ವಿಲ್ ಬಿ ಆಲ್ ರೈಟ್ ' ' ಹನ್ನೆರಡು ವರ್ಷ.. ' ಎರಡು ಕಣ್ಣುಗಳನ್ನು ಹಿಗ್ಗಿಸಿ ಡಾಕ್ಟರ್ ಅವರ ಕೈಯನ್ನು ಹಿಡಿದು. ' ತಾವು ಇಷ್ಟು ಭರವಸೆ ಕೊಟ್ರೆ ಸಾಕು ಡಾಕ್ಟರ್, ಇವತ್ತು ಸಂಜೆಯೆ ಆಪರೇಷನ್ ಮಾಡಿಸಿಬಿಡುವೆ'
'ಮತ್ತೆ, ಹಣ..?'
'ಅದರ ಬಗ್ಗೆ ಚಿಂತಿಸಬೇಡಿ ಡಾಕ್ಟರ್, ಇವತ್ತು ಒಬ್ಬ ದೇವರು ಸಿಗ್ತಾ ಇದ್ದಾನೆ ಅವನಿಂದಲೆ ಕಸಿದುಕೊಂ... ಕ್ಷಮಿಸಿ ಪಡೆದುಕೊಂಡು ಬರುತ್ತೇನೆ.'
' ಓಕೆ, ಲೆಟ್ಸ ಸೀ.. ಆಯ್ ವಿಲ್ ಸಿ ಯು ಇನ್ ಇವನಿಂಗ್, ಟೆಕ್ ಕೇರ್' ಎನ್ನುತ್ತಲೆ ಅಖಿಲನ ಭುಜವನ್ನು ತಟ್ಟಿ ಹೊರಟು ಹೋದರು ಡಾಕ್ಟರ್.
ಬೆಂಚಿನಿಂದ ಎದ್ದ ಅಖಿಲನು ನೇರವಾಗಿ ತಾಯಿಯ ಹತ್ತಿರ ಹೋದನು. ಆಕೆಯಿನ್ನು ಮಲಗಿಕೊಂಡಿದ್ದಳು. ತಾಯಿಯನ್ನು ಎಚ್ಚರಿಸದೆ, ಅವಳ ಕಾಲನ್ನು ಮುಟ್ಟಿ ನಮಸ್ಕರಿಸಿ, ಮನೆಯತ್ತ ಓಟಕಿತ್ತನು.
' ಹೌದು ನನಗಿನ್ನು ಚೆನ್ನಾಗಿ ನೆನಪಿದೆ, ನನಗೆ ಟೈಫಾಯ್ಡ ಆಗಿ ಮಲಗಿದ್ದಾಗ, ಹತ್ತಾರು ಮನೆಗಳ ಕಸಮುಸುರೆಯನ್ನು ಮಾಡಿ, ನನ್ನನ್ನು ಕಣ್ಣಲ್ಲಿ ಕಣ್ಣಿಟ್ಟು ಸಾಕಿದ್ದು, ಅವಳು ನನ್ನನು ಓದಿಸುವ ಸಲುವಾಗಿ ಅದೇಷ್ಟೊ ರಾತ್ರಿ ಪಾಳೆಗಳಲ್ಲಿ ದುಡಿದದ್ದು, ನಾನುಂಡ ನಂತರವೆ ತಾನುಂಡು ಮಲಗುತ್ತಿದ್ದದ್ದು, ನಾನು ದುಡಿಯಲು ಹೊರಟ ನಂತರವು ನನ್ನ ಖರ್ಚಿಗೆಂದು ವಾರಕ್ಕೊಮ್ಮೆ ಬಲವಂತವಾಗಿ ಜೇಬಿನಲ್ಲಿ ಹಣವನ್ನಿಟ್ಟು ಕಳಿಸುತ್ತಿದ್ದದ್ದು, ಒಂದೆ ಎರಡೆ ಅವಳು ನನಗಾಗಿ ಮಾಡಿದ ತ್ಯಾಗಗಳು, ಇಂದು ಅವಳನ್ನು ಉಳಿಸಿಕೊಳ್ಳದೆ ಹೋದರೆ, ಬದುಕಿದ್ದು ವ್ಯರ್ಥ, ಒಂದು ವೇಳೆ ನಾನು ಪೋಲಿಸರ ಕೈಗೆ ಸಿಕ್ಕಿ ಹಾಕಿಕೊಂಡರು ರಮೇಶ ಅವರಲ್ಲಿ ಬೇಡಿಕೊಳ್ಳುತ್ತೇನೆ, ನನ್ನ ಪರವಾಗಿ ನನ್ನ ತಾಯಿಯ ಅಂತ್ಯ ಸಂಸ್ಕಾರವನ್ನು ನೀವೆ ಮಾಡಿಬಿಡೆಂದು, ಕ್ಷಮೆಯಿರಲಿ ಅವ್ವ ನಾನೇನಾದರು ಈ ಯುದ್ಧದಲ್ಲಿ ಸೋತು, ನಿನ್ನ ಕೊನೆಯ ಘಳಿಗೆಯಲ್ಲಿ ಎರಡು ಹನಿ ನೀರನ್ನು ಹಾಕಲು ನಾನಲ್ಲಿರದಿದ್ದರೆ, ಗೆದ್ದು ಬಂದರೆ, ನಿನ್ನನ್ನು ಹೊತ್ತುಕೊಂಡು ಊರ ತುಂಬಾ ಮೆರವಣಿಗೆಯನ್ನು ಮಾಡುತ್ತೇನೆ. ಇವತ್ತು ಏನೆ ಆದ್ರು ಕಂಟ್ರ್ಯಾಕ್ಟರ್ ನ ಬಲಿಯನ್ನು ಹಾಕುವುದೆ.' ಎಂದು ಧೃಡ ನಿರ್ಧಾರದೊಂದಿಗೆ ಮನೆಯ ಹತ್ತಿರ ಬಂದು, ಕೀಲಿಯನ್ನು ತೆಗೆದು ಬೇಕಾದ ಎಲ್ಲಾ ಸಾಮಾನುಗಳನ್ನು ತೆಗೆದುಕೊಂಡು ಮನೆಯಿಂದ ಹೊರಬಂದು ಕೀಲಿಯನ್ನು ಹಾಕಿಕೊಂಡು, ಮುಖ್ಯ ಬಜಾರಕ್ಕೆ ಬಂದು ಆಟೋವನ್ನು ಹತ್ತಿಕೊಂಡು ಬ್ಯಾಂಕಿನ ಹತ್ತಿರ ಹೊರಟನು.
Sunday, October 14, 2018
ಭಾಗ ೯
Subscribe to:
Post Comments (Atom)
No comments:
Post a Comment