Saturday, April 25, 2020

ಶಾಯರಿ

ರಂಗೀಯು ತೊರೆದು
ಹೋದ, ದುಃಖಕ್ಕಾಗಿ
ಶರಾಬನ್ನು
ಕುಡಿಯುತ್ತಿಲ್ಲ
ಸಾಕಿ...
ಅವಳಿಗಾಗಿ,
ಲೆಕ್ಕವಿರದಷ್ಟು
ಹೂಗಳನ್ನು 
ಕೊಂದಿದ್ದೇನೆ. ಅದರ
ಪಶ್ಚಾತ್ತಾಪಕ್ಕಾಗಿ.

ಉಸಿರುಗಟ್ಟಿ ಹೋಗುತ್ತಿವೆ,
ಧರ್ಮ ಗ್ರಂಥಗಳು
ನಿಟ್ಟುಸಿರು, ಜೀವಗಳನ್ನು
ಬಲಿ ಪಡೆದ ಕಟ್ಟಡಗಳಲ್ಲಿ
ಸಾಕಿ...
ನಾನು ಬರೆದದ್ದು
ಪ್ರೇಮಗ್ರಂಥ. ಮಡಿ
ಮೈಲಿಗೆ ಮುರ್ಚಟ್ಟುಗಳಿಂದಲೆ
ತುಂಬಿ ಹೋಗಿದೆ. 
ಬದುಕಿಸುತ್ತದೆ ನಾಲ್ಕು
ದಿನ ಹೆಚ್ಚಿಗೆ
ಓದಿದವರನ್ನು.

No comments:

Post a Comment