ಈ ವರ್ಷ ನಮ್ಮ ಭಾಗದ,
ಅದೇಷ್ಟೊ ಹಳ್ಳಿಗಳ
ಮನೆಗಳಲ್ಲಿ ಬೆಳಗುತ್ತಿಲ್ಲ
ದೀಪ!!
ಹಬ್ಬದ ಸಂತಸಕ್ಕೆ
ತಣ್ಣೀರೆರಚಿ, ನಗುತ್ತಿದ್ದಾನೆ
ಮಳೆರಾಯ. ತೋರಿ
ತನ್ನ ಪ್ರತಾಪ!!
ನಡು ನೀರಿನಲ್ಲಿ...
ನಿಂತವರ ಮಧ್ಯದಲ್ಲಿ
ನಾ ಹೇಗೆ ಆಚರಿಸಿಕೊಳ್ಳಲಿ
ದೀಪಾವಳಿ!!!
ಸಾಕು...ಸಾಕೆಂದರು
ನಮ್ಮೆಲ್ಲರ ನೆತ್ತಿಯ
ಮೇಲೆ ರುದ್ರನರ್ತನಗೈಯ್ಯುತಿದೆ
ಮಳಿ!!
ಮೆಹಂದಿ ಹಚ್ಚಿಕೊಳ್ಳಬೇಕಿದ್ದ
ಹೆಂಗಳೆಯರ ಕೈಗಳಿಗೆಲ್ಲ
ಮೆತ್ತುಕೊಂಡಿದೆಯಿಂದು
ಕೆಸರು!!
ಮನೆಯಂಗಳವು ಹಳ್ಳವಾದ
ರೀತಿಯ ಕಂಡು...ಬಿಡುತ್ತಿರುವರೆಲ್ಲ
ನಿಟ್ಟುಸಿರು!!
ಹೌದು, ಉಳಿತಾಯ
ಖಾತೆಯಲ್ಲಿ ಹಣವು
ಬಂದು ಬಿದ್ದಿದೆ!!!
ಇದರಿಂದಲೆ,
ಬದುಕನ್ನು ಕಟ್ಟಿಕೊಳ್ಳಬಹುದೆ?
ಎಷ್ಟು ಜನರಿಗೆ
ಗೊತ್ತಿದೆ.
ಅವನ ಅಟ್ಟಹಾಸಕ್ಕೆ
ನಲುಗಿ ಹೋಗಿರುವ
ಈ ಹೂವುಗಳೆ
ಸಾಕ್ಷಿ!!!
ಸುಂಕ ಕಟ್ಟುವರಾರು?
ಕಂಡು..ಕಂಡು..
ಬೆಂದು ಹೋಗುತ್ತಿದೆ
ಮನಸಾಕ್ಷಿ!!
No comments:
Post a Comment