ಚುಟುಕು
ನೀನು....
ಕಸದಲ್ಲೆ, ಹುಟ್ಟಿದ್ದರು
ಸೂಸುವ ಸುಗಂಧ
ಮಾತ್ರ ದುರ್ಗಂಧವಾಗಿಲ್ಲ!!
ಮಾಡಿದ್ದನ್ನು ಇಲ್ಲಿಯೆ
ಉಂಡು ಹೋಗಬೇಕು!
ಪಾಪದ್ದು...
ಹಳಸಿ ಹೋಗುತ್ತದೆ!!
ಪುಣ್ಯದ್ದು, ಹೊಟ್ಟೆಯನ್ನಾದರು
ತುಂಬಿಸುತ್ತದೆ!
ಎಷ್ಟು ದರವಾದರೇನು?
ಖರಿದೀಸಿಕೊಳ್ಳಬೇಕೆಂದಿದ್ದೆ
ಈ ಸೀರೆಯನ್ನು
ನನ್ನವಳಿಗಾಗಿ...
ಖರಿದಿಸಲಿಲ್ಲ!!!
ಕಾರಣವಿಷ್ಟೆ, ಇದರಷ್ಟು
ನುಣುಪು ನಡವು
ನನ್ನವಳದ್ದು ಇಲ್ಲದ್ದಕ್ಕಾಗಿ
ಸಾಲು ಕದ್ದವನ
ಮಾತು ಬಿಡು! ಅವನೇನು
ಭಾವವ ಕದಿಯಬಲ್ಲನೇನು?
ಮನಸ್ಸು ಕದ್ದವಳು
ನೀನು... ಬಾ ಇಲ್ಲಿ
ಉತ್ತರಿಸು, ಈ ವಿರಹದ
ಸೆರಮನೆವಾಸಿಯನ್ನು
ಬಿಡಿಸಿಕೊಂಡು ಹೋಗುವುದು
ಯಾವಾಗ?
ನನ್ನೆದೆಯೆ..
ಕತ್ತಲೆಯ ಕೂಪ!
ನಾನೇಕೆ ಹಚ್ಚಲು
ಹೋಗಲಿ...
ಬೇರೆಯವರಂಗಳದಲ್ಲಿ
ದೀಪ!!
ಇದಲ್ಲವೇನು ಮೋಸ?
ತುಟಿಯಂಚಿನಲ್ಲಿಯೆ.. ತುಂಬಿಟ್ಟು
ಕೊಂಡಿರುವೆಯಲ್ಲ,
ಮಧುರಸ...
ಅರಿವಾಗುತ್ತಿಲ್ಲವೇನು?
ಬಾಯಾರಿ.. ಕುಳಿತಿಹನಿಲ್ಲಿ
ಪ್ರೇಮದಾಸ!
ಕಲ್ಲು ಗೋಡೆಗಳಿಗಾಗಿ
ನಿಮ್ಮ ಮನಸ್ಸುಗಳನ್ನು
ಕಲ್ಲಾಗಿಸಿಕೊಳ್ಳಬೇಡಿ!
ಇಲ್ಲಿ ಯಾವುದು
ಶಾಶ್ವತವಲ್ಲ!! ಇದ್ದ
ನೆಲವನ್ನೆ,
ಸ್ವರ್ಗವಾಗಿಸಿಕೊಂಡುಬಿಡಿ
ಎಷ್ಟರ ಮೆರದಾಡ್ತಿದಿ ಓಣ್ಯಾಗ
ಮೂಗಿಗೆ ಚುಚ್ಚಿಸಿಕೊಂಡ ದೊಡ್ಡ ಮೂಗುತಿ
ಕೇಳ್ದೊರ ಮುಂದೆಲ್ಲ,
ಭಾರವಾಗುವುದಿಲ್ಲೇನು?
ಚೆಲುವೆ, ಮೂಗಿಗೆ
ಈ ನತ್ತು!!
ತರದಿದ್ದರೆ ಸಾಕು...
ನಿನ್ನ ಸೌಂದರ್ಯಕ್ಕೆ
ಕುತ್ತು!!
ಪ್ರೀತಿಯೂರಿನಲ್ಲಿ
ನೋವಿಗೆ ಮದ್ದಿಲ್ಲವೆಂದರಿತಿದ್ದರೂ
ಹೆಜ್ಜೆ ಇಟ್ಟೆ!
ಮರಳಲಿ ಹೇಗೆ?
ಅವಳಿಲ್ಲದೆ ಬರಿಗೈಯಲ್ಲಿ!
ಸಾವಾದರು ಬರಬಹುದಲ್ಲ!!!
ಕರೆಯಲೆಂದು, ಅದಕೆ
ಇಲ್ಲಿಯೇ... ಸುಮ್ಮನೆ
ಕುಳಿತುಬಿಟ್ಟೆ!!
ಕಣ್ಣ ಹನಿಗಳಿಗೆ
ಬೆಲೆ ಕಟ್ಟುವರಾರು?
ಅದು ಬರೀ ಉಪ್ಪು!
ಅತಿಯಾಗಿ ನಂಬಿ
ಮೋಸ ಹೋಗುವುದಿದೆಯಲ್ಲ
ಅದು ನಮ್ಮ ತಪ್ಪು!!
ಬಿಟ್ಟು ಹೋಗುವುದಾದರೆ....
ಹೇಳದೆ ಹೊರಟುಬಿಡು!!
ಕಾಯುವುದರಲ್ಲೂ ಒಂಥರಾ
ಸುಖವಿದೆ!
ನಿನಗೇನು ಗೊತ್ತು!!,
ನೀನಿಲ್ಲವೆಂಬ ಸತ್ಯದ
ಜೊತೆ ಬದುಕುವುದರಲ್ಲಿ
ಅನುಭವಿಸಿಕೊಳ್ಳಲಾರದಷ್ಟು
ಯಾತನೆಯಿದೆ!
ನಾವು ದೇವರಿಗೂ
ಬೆಲೆಯನ್ನು ಕಟ್ಟುತ್ತೇವೆ
ಉಡುಗೊರೆಯ
ಅಂಗಡಿಯಲ್ಲಿ!!
ಸ್ವೀಕರಿಸುವವರು
ಪೂಜಿಸುವವರೊ?
ಎಡೆಬಿಡದೆ ಸುರಿದು
ಹೋಗಿದೆ ಮಳೆ
ಫಸಲಿಗಿಂತಲೂ ಫಲವತ್ತಾಗಿ
ಬೆಳೆದಿದೆ ಕಳೆ
ಎರಡರ ನಡುವೆ ಸಿಕ್ಕು
ಕೊಳೆತು ಹೋಗುತ್ತಿದೆ
ಬೆಳೆದ ಬೆಳೆ
ಚಂದಿರನಿಗೂ ದಕ್ಕಿತಿಂದು
ಸ್ವಾತಂತ್ರ್ಯ.....
ಮೋಡಗಳ
ಸೆರೆಯಿಂದ!
ಇನ್ನಾದರೂ...
ಸಿಗಬಹುದೇನೊ?
ನಮಗೆಲ್ಲ ಮುಕ್ತಿ
ನೆರೆಯಿಂದ!!!
ಹೇಳಿಕೊಳ್ಳಬೇಕೆಂದಿರುವೆ
ನಿಮ್ಮೆದುರಿಗೊಂದು
ಗುಟ್ಟಿನ ವಿಷಯ!
ಕಾಡುತ್ತಿದೆ...
ಈ ಗುಟ್ಟು, ನಿಮ್ಮೊಳಗೆ
ಗುಟ್ಟಾಗಿ ಉಳಿಯುವುದೆ?
ಎಂಬ ಸಂಶಯ!!!
ಈಗೀಗ ಎಲ್ಲರೂ...
ಕಟ್ಟುತ್ತಿದ್ದಾರೆ
ಬೆಲೆಯನ್ನು!!
ಕಟ್ಟುವ ನೂಲಿಗೂ
ತೊಡುವ ನೂಲಿಗೂ...
ಯಾರಿಗೂ...
ಅರಿವಾಗುತ್ತಿಲ್ಲ
ನಮ್ಮಯ ಗೋಳು!!
ಇನ್ನೂರು ಕೊಟ್ಟರು
ಸಿಗುತ್ತಿಲ್ಲ ಆಳು!!
ಸಿಕ್ಕರೂ...ಪದೆ..ಪದೆ
ಮಳೆಯು ಸುರಿದು
ಮಾಡುತ್ತಿದೆ, ಮೂರಾಬಟ್ಟೆ
ನಮ್ಮೆಲ್ಲ ಒಕ್ಕಲಿಗರ ಬಾಳು!!
ವರೋಪಚಾರ ಅಪರಾಧ!!!
ಅದಕ್ಕಾಗಿ, ನಿನ್ನನ್ನು ಬಿಟ್ಟು
ಬೇರೇನು... ಬೇಡೆನು
ಚೆಂದುಳ್ಳಿ!!
ಸಂಸಾರ ಸಾಗಿಸಲು
ರಸಿಕತೆಯಾದರು ಬೇಕಲ್ಲವೆ?
ತಡಮಾಡಬೇಡ, ಹೊತ್ಗೊಂಡು
ಬಾ ಪುಟ್ಟಿ, ಈರುಳ್ಳಿ!!
ನಿಮ್ಮೊಳಗಿನಷ್ಟು
ಶಾಂತಿಯು ತುಂಬಿಕೊಂಡಿಲ್ಲ
ನನ್ನೆದೆಯಲ್ಲಿ
ಗಾಂಧಿ...
ಆದರೂ....
ವಿನಾಕಾರಣ, ಹಿಂಸಿಸುವ
ನೆನಪುಗಳಿಗೆ ಹಾಡಬೇಕಿದೆ
ನಾಂದಿ...
ನಾನೀಗ
ಬೀಜವಿಲ್ಲದ ಹಣ್ಣಾಗಬೇಕಿದೆ.
ಹಳತುಗಳ ನಡುವೆ
ಸಿಕ್ಕು...ಕೊಳೆತು
ಹೋಗುವ ಮುನ್ನ,
ಹೊಸತನಗಳೊಳಗೆ
ಬೆರೆತು ಮತ್ತೆ
ಚಿಗುರಬೇಕೆಂದೆನಿಸಿದೆ.
ಸುಡುವ ಸೂರ್ಯನಿಗೂ
ಕೂಡಿ ಬಂದಿತಿಂದು
ಕಂಕಣದ ಭಾಗ್ಯ!
ನೀಡುವೆ ನೀನೆಂದು
ಒಪ್ಪಿಗೆ, ಕೂಡಿಬರಲು
ನಮ್ಮಿಬ್ಬರಿಗೂ
ಕಂಕಣದ ಸೌಭಾಗ್ಯ!!
No comments:
Post a Comment