ಅ
ಮೌನ ಯಾವತ್ತೂ ಮುರಿಯಲ್ಲ ಗೆಳೆಯ.
ನನ್ನ ಬಳಿ ಮತ್ತೊಂದು ಹೃದಯ ಇಲ್ಲ.
ಈ ಮೌನ ನನ್ನ ಮರಣ
ನಿನಗೆ ಬಿಡುಗಡೆಯ ಸಂಭ್ರಮ..
ನಾ
ಮೌನದ ಮರಣ ನೀನಗೆತಕೊ.....
ಮುರಿದು ಮಾತನಾಡಲಾರೆಯ
ಎರಡು ಮಾತು...
ಮರಣದ ಶಯ್ಯೆಯಲಿ ಮಲಗಿರುವ
ನಿನ್ನ ಹೃದಯಕೆ... ಮಾತುಗಳ ಸಂಜೀವಿನಿಯ
ಹೊತ್ತು ನಾ ತರುವೆ
ಸಾಕಲ್ಲವೆ.. ನನ್ನದೊಂದೆ ಹೃದಯ...
ಬೇಕೆ ನಿನಗೆ ಇನ್ನೊಂದು ಎದೆ ಗೂಡು...
ಅ
ನೀನೆ ಮುಕ್ತಿಯನ್ನು ಬೇಡಿ
ಬಿಡುಗಡೆಯ ಪತ್ರ ತಂದಾಗ
ನಾ ಮೌನ ವಾಗಿ ಸತ್ತೆ
ನಿನಗೆ ಸಂಭ್ರಮ ಕೊಟ್ಟೆ ಗೆಳೆಯ
ನಾ
ನಿಜ..
ನಾನು ಮುಕ್ತಿಯನ್ನು ಬೇಡಿ
ಬಿಡುಗಡೆಯ ಪತ್ರ ತಂದಿದ್ದು
ನಿನ್ನ ಮೌನಕ್ಕೆ ಹೊರತು..
ನಮ್ಮಿಬ್ಬರ ಪ್ರೀತಿಗಲ್ಲ
ಮಿಡಿವ ಎದೆಬಡಿತವದು ನಿಂತರೆ
ಸಂಭ್ರಮವ ಅನುಭವಿಸಲು...
ಹೃದಯವಾದರೂ ಉಳಿದಿರುವುದೆಲ್ಲಿ..
ಅ
ಬೇಕು ಎಂದು ಬರಲು ಒಮ್ಮೆ
ಬೇಡ ಎಂದು ಹೋಗಲು ಒಮ್ಮೆ
ನನ್ನ ಹೃದಯ ಆಟದ ಮೈದಾನ ವೇ
ನಾ
ಛೇ....ಛೇ...
ಯಾರವರು ಹಾಗೆ ಹೇಳಿದವರು
ಅದೊಂದು ನಮ್ಮೂರ ಬಯಲು ಸೀಮೆ
ಹಚ್ಚ ಹಸಿರನೆ ಹೊದ್ದು ಮಲಗಿದ
ಸಹ್ಯಾದ್ರಿ..
ಅದೊಂದು ಸದಾ ಪ್ರೀತಿಯ ಅಲೆಗಳ
ಅಪ್ಪಳಿಸುವ ಪ್ರೇಮದಾ ತೀರ..
ನೋಡಲ್ಲಿ ಆ ತೀರದಲ್ಲಿ ನಾವಿಬ್ಬರು
ಅಲೆದಾಡಿದ ಹೆಜ್ಜೆಯ ಗುರುತುಗಳು
ನಿನಗೆ ಕಾಣಿತ್ತಿಲ್ಲವೆ..?
ಅ
ಹಿಂದೆ ಅಲೆದಾಡಿದ ಹೆಜ್ಜೆ ಗುರುತು
ಮಾಸಿಲ್ಲ
ಅಂದು ನೀ ಕೊಟ್ಟ ಮಾತು ಇಂದು
ನೀನೆ ಮುರಿದು..
ಮತ್ತೆ ಒಮ್ಮೆ ಮಾತಾಡು ಅಂದರೆ
ಅದು ಅಸಾಧ್ಯ..
ಅಂದು ಅಪ್ವಳಿಸಿದ ಪ್ರೇಮ ತೀರದಲ್ಲಿ
ಇಂದು ಶವವಾಗಿ ಮಲಗಿರುವೆ..
ನಾ
ಅದಕ್ಕೆ ನಾನು ಹೇಳಿದ್ದು..
ನಿನ್ನ ಹೃದಯ ಕೋಮಲ
ತಾಳಿಕೊಳ್ಳಲಾರದಾವ ನೋವು..
ಮಾತುಗಳ ಭಾರವ ಹೊತ್ತು ಹೊತ್ತು
ವೇದನೆಯ ಸಹಿಸಲಾರದೆ...
ಆ ಹೆಜ್ಜೆ ಗುರುತುಗಳು ಮಾಸದಂತೆ
ಮಲಗಿರುವೆ ಅಲೆಗಳಿಗೆ ಅಡ್ಡವಾಗಿ...
ಅಷ್ಟು ಗೊತ್ತಿಲ್ಲವೆ ನನಗೆ..
ಏಕೀ.. ಸಾವಿನ ಮಾತು...
ಹೊತ್ತು ತಾ ಆ ಸಾಗರದ ತಟದಿಂದ
ನಾ ಭರಿಸಲಾಗದಷ್ಟು ಮುತ್ತು..
ಅ
ನನ್ನ ಹೃದಯ ಕೋಮಲ
ಅಂತ ತಿಳಿದು
ನೋವಿನ ಮಾತುಗಾಳಡಿದೆ ಅಲ್ಲ
ಬಾ ಅಂದರೆ ಹೇಗೆ ಬರಲಿ
ನೀ ಇರುವುದು ಸಾಗರದ ಒಂದು ತುದಿಯಲ್ಲಿ
ನಾ ಇರುವೆ ಮತ್ತೊಂದು ತುದಿಯಲ್ಲಿ
ನಾ
ಏನೋ ಕೆಟ್ಟ ಘಳಿಗೆ...
ಆಡಿದೆ ಎರಡು ಮಾತು... ನೀನು
ಸಮಯಕ್ಕೆ ಸರಿಯಾಗಿ ನನ್ನ ಭೇಟಿಗೆ
ಬಂದಿದ್ದರೆ..
ಆ ಸುಡು ಸುಡುವ ರವಿಗಿಂತಲೂ..
ನೀ ಬರಲಾರದ ವಿರಹದ ತಾಪವೆ
ಹೆಚ್ಚು ಸುಟ್ಟಿದ್ದು ನನ್ನ.... ಆ
ಕೋಪದ ತಾಪದಲ್ಲಾಡಿದ ಎರಡು ಮಾತಿಗೆ
ನೀನು ಮುನಿಸಿಕೊಂಡೆಯಲ್ಲ..
ಅದಕ್ಕಿಲ್ಲ ನನ್ನ ಕೋಪ.. ಇಷ್ಟು ಕಾದು ಕಾದು
ಕೆಂಡವಾದ ನನ್ನನು... ನಿನ್ನ ನಗುವ ಹೂವಿಂದ
ಅರಳಿಸುವುದ ಬಿಟ್ಟು ಕಲಹಕ್ಕೆ ನಿಂತೆ..
ಮೇಲಿದ್ದ ಆ ರವಿಯು ನನ್ನ ಅವಸ್ಥೆಯನ್ನು ನೋಡಿ
ನಕ್ಕಂತಾಯಿತು ಅದಕ್ಕೆ ಭುಗಿಲೆದ್ದಿತು ಕೋಪ
ನಿನ್ನ ಮೇಲೆ..
ರಾಮನ ಮಡದಿಗಾಗಿ ಹನುಮನು
ದಾಟಿದನು ಸಾಗರವ.. ಇನ್ನೂ ನನ್ನೊಲವಿಗಾಗಿ
ಈ ಒಂದೆ ಸಾಗರವೇನು... ಲೋಕದ ಸಪ್ತ
ಸಾಗರಗಳನೆ ದಾಟಿ ಬರುವೆ ನಿನ್ನ ನಗುವಿಗಾಗಿ
ಅ
ಅಯ್ಯು ಗೆಳೆಯ ನೀ ಇರುವ
ಜಾಗವ ಹುಡುಕಿ ಬಂದವಳು ನಾನು
ನೀನ್ನ ಮಾತಿಗೆ ಬೇಸರ ಇಲ್ಲ.
ನಿನ್ನ ಹೃದಯದ ದಿಂದ ದೂರ
ತಳ್ಳಿದೆ ಅಲ್ಲ.
ಅ ನೋವು ಕಷ್ಟ ಕರ..
ನಾನು ಅ ಸೀತೆಯಂತೆ
ನಿನ್ನ ಪ್ರೀತಿಸಿದೆ ಆರಾಧಿಸಿದೆ
ಅ ಲಕ್ಮಣ ಹಾಕಿದ ಗೆರೆ ಸೀತೆ ದಾಟಿಯಳು
ನಾ ನಿನ್ನ ಗೆರೆ ಎಂದು ದಾಟಿರಲಿಲ್ಲ
ನಿನಗೊ ಗೊತ್ತು..
ಅದರು ನೀ ನನ್ನ ಬಳಿ ಅಣೆ ಮಾಡಿಸಿಕೊಂಡೆಯಲ್ಲ
ಆ
ಏಕೇ.... ನಿನಗೆ ಗೊತ್ತಿಲ್ಲವೆ
ನಾನಾವ ಕಾರಣಕ್ಕಾಗಿ ಆಣೆಯನ್ನು
ಮಾಡಿಸಿಕೊಂಡೆನೆಂದು..
ಸಿಕ್ಕಾಗಲೆಲ್ಲ ಮಾತಿನ ಮತ್ತಿನಲೆ
ತೇಲಿಸುತ್ತಿದ್ದವಳು.. ಅಂದೇಕೆ ಮೌನವಾದೆ
ನೀನೆ ಸರಿಯಲಿಲ್ಲವೆ.. ಎರಡು ಹೆಜ್ಜೆ
ಹಿಂದೆ..
ಪ್ರೀತಿಯ ಹಾದಿಯಲಿ ಕಷ್ಟಗಳ ಗುಡ್ಡಗಳೆ
ಬಂದರೂ..
ಮುಳ್ಳಿನ ಹಾಸಿಗೆಯೆ ಹಾಸಿದ್ದರೂ..
ಲೋಕದ ಜನರೆ ಎದುರಾದರೂ... ಮುಂದಿಟ್ಟ
ಹೆಜ್ಜೆಯ ಹಿಂದಕ್ಕಿಡೇನು ಎಂದವಳು..
ಇಂದೇನು ನೀ ಮಾಡಿದುದು..
ಅ
ನಾ ಇಂದು ನಿನ್ನ ಜೊತೆಗೆ
ಹೆಜ್ಜೆಗಳನ್ನು ಸೇರಿಸಲು ಸಿದ್ದಳೆ
ನೀನು ನಿನ್ನ ಅಣೆಯನ್ನು ಮರೆತು
ಮಾತಾಡುತ್ತಿದಿಯ..
ಅಂದು ನಿ ಆಡಿದ ಮಾತು ಮರೆತು
ಇಂದು ಮಾತಾಡುತ್ತಿರುವೆ ಗೆಳೆಯ..
ಅಂದು ಆಡಿದ ಮಾತು ಇಂದು
ನನ್ನ ಎದೆಯಲ್ಲಿ ನಡುಕ ಹುಟ್ಟಿಸುತ್ತದೆ..
ಮರತೆಯ ನಿನ್ನ ಮಾತುಗಳನ್ನು..
ನನಗೆ ಬಿಡುಗಡೆ ಮುಕ್ತಿ ಕೊರಿ
ನಿನ್ನ ಶಿರದ ಮೇಲೆ ಕೈಯಿರಿ
ಹೇಳಿದ್ದು ಮರೆತು ಮಾತಾಡಬೇಡ
ನಾ
ಬಂದು ಬಿಡು ಬರದ ನೀರಿಕ್ಷೆಯ
ಹುಸಿ ಮಾಡಿ ಸುರಿವ ಮಳೆಯಂತೆ
ಇನ್ನೇನು ಸೋತೆ ಎನ್ನುವ ಕೊನೆಯಲ್ಲಿ
ಗೆಲುವನ್ನು ತಂದಂತೆ..
ಮಾಡಿದ ಆಣೆಯನು ಕಾಡಿದ
ಶಿವನಿಗೆ ಅರ್ಪಿಸಿ..
ಶಿವಪಾರ್ವತಿಯರ ಹಾಗೆ ಸಪ್ತಪದಿಯನು
ತುಳಿಯೋಣ..
ಹೊಸ ಬಾಳಿಗೆ ಹೆಜ್ಜೆಯ ಹಾಕೋಣ
No comments:
Post a Comment