Wednesday, May 10, 2017

ಮಯೂರ ಕಾಗೆ

ಕುಕ್ಕದಿರು.... ಮನವೇ....
ಕಾಗೆಯ ರೂಪದಿ... ಬಂದು
ಮನಸಿನ ಹಾದಿಯದು ಹೊದ್ದು
ಮಲಗಿದೆ ಕತ್ತಲನು....

ಬದುಕಿನ ಬೆಳಕಿನ ಆಶಾಕಿರಣಗಳ
ಭರವಸೆಯಿಲ್ಲದೆ...  ಸದ್ದಿಲ್ಲದೆ....
ಯಾರೊಬ್ಬರ ಅರಿವಿಗೂ ಬಾರದಂತೆ
ಸೋತು.. ಸೊರಗಿ..... ನಿಶ್ಚಲವಾಗಿಬಿಟ್ಟಿದೆ..

ಎಲ್ಲಿಂದಲೊ... ಈ ತಮದ ಮನಕೆ
ಬೆಳಕನೊಂದು ತಂದಿರುವೆಯಲ್ಲ.....
ನೋಡು... ನನ್ನ ಅಂತರಾತ್ಮವು ಕಪ್ಪು
ಬಣ್ಣವ ಹೊಂದಿದೆ...

ಎಂಥ ವಿಪರ್ಯಾಸವಲ್ಲವೆ..... ಕಡು ಕಪ್ಪು
ಕತ್ತಲಿನ ಗೂಡಿನೊಳಗೆ.. ಹಾಲ ದೀಪವನುರಿಸಿಕೊಂಡು
ಕಪ್ಪು ಮನಸಿನ ರೂಪವೊಂದು... ಮನದ
ಕತ್ತಲನು ತೊಡೆಯಲೆತ್ನಿಸುತಿಹುದು....

ಹುದುಗಿದ ಹುಳುಗಳ ಹೆಕ್ಕುವ...ಸೋಗು
ಹಾಕಿರುವುದೊ.... ಅರಿತವರಾರು...
ಇದರ ಒಳಮರ್ಮವ... ಬರೆಯುವರಾರೂ..
ಇರಲಿಬಿಡು ಕಾಗೆಯೆ... ನೀ ಹೊತ್ತಿಸಿರುವ
ದೀಪವಾದರೂ... ಉರಿಯುವುದು
ಎಷ್ಟೊತ್ತು..

ಹೆ: ಶರಣಪ್ಪ ಕ ಬೇವಿನಕಟ್ಟಿ
ಊ: ಗಜೇಂದ್ರಗಡ ತಾ.ರೋಣ ಜಿ. ಗದಗ
ದೂ:೯೯೮೦೮೯೯೫೨೧

No comments:

Post a Comment