ಅದೇನು ಕಾಕತಾಳೀಯವೊ..
ಇಂದು ವಿದ್ಯಾ ಅಧಿ ದೇವತೆಯಾದ
ಶಾರದೆಯ ವಾರವು...
ಅಕ್ಷರಗಳ ಹಸಿವನು ನೀಗಿಸುವ
ಶಿಕ್ಷಕಿಯಾದ ಸುಧಾಕೃಷ್ಣ ರವರ
ಜನ್ಮದಿನವು... ಇಂದೆ ಒಟ್ಟೊಟ್ಟಿಗೆ
ಬಂದಿವೆಯೊ...
ಎಷ್ಟು ವರ್ಷಗಳಿಗೊಮ್ಮೆ ಇಂತಹ
ಸುವರ್ಣ ದಿನವದು ಕೂಡಿ ಬರುವದೊ
ಈ ಶುಭ ದಿನದಲ್ಲಿ ಅವರಿಗೆ ಈ ಮುಖಪುಟದ
ಸರ್ವ ಸದಸ್ಯರಿಂದಲೂ ಜನ್ಮ ದಿನದ
ಶುಭಾಶಯಗಳನ್ನು ಹೇಳಲು ಹರುಷದಾಯಕವಾಗುತ್ತಿದೆ.
ಸುಂದರ ಸುಮಗಳ...
ಸುರಿಮಳೆಯೆ ಸುರಿಯಲಿ
ನಡೆಯುವ ದಾರಿಗೆ...
ಸುರಗಂಗೆಯೆ ಸುಧೆಯ
ಸೂಸುತಿರಲಿ ಬಾಳಿನ
ಹಾದಿಗೆ
ಸುಮಧುರ ಸುಲಲಿತ
ಸ್ವರ್ಣಪದಗಳೆ.. ಕರಗಳಲಿ
ಮೂಡಿ ಬರಲಿ
ಸರಸರನೆ ಸಪ್ತಸ್ವರಗಳ
ಪದಗಳೆ ಸುರಿಯುತಿರಲಿ
ಮಾತಿನಲಿ...
ಸುಧಾ ರವರು ಕೇವಲ ಕೃಷ್ಣರಿಗಷ್ಟೆ
ಸುಧೆಯಾಗಿರದೆ....
ಅವರ ಕವನಗಳ ಮೂಲಕ ನಮಗಿಷ್ಟು
ಸುವಿಚಾರ ಧಾರೆಗಳ ಸುಧೆಯ ಹರಿಸಲಿ..
ಬದುಕಿನ ಮುಂದಿನ ದಾರಿಯುದ್ದಕ್ಕೂ
ಸುಮರಾಶಿಗಳೆ ಚೆಲ್ಲಿರಲಿ ಎಂದು
ಹಾರೈಸುತ್ತೇವೆ
No comments:
Post a Comment