ನನ್ನ ತಿಳುವಳಿಕೆಗೆ ನಿಲುಕಿದಷ್ಟು
ಅಲ್ಲಿ ಇಲ್ಲಿ ಓದಿ.. ಅವರಿವರು ಹೇಳಿ
ಕೇಳಿದ್ದಷ್ಟು ಇಲ್ಲಿ ಬರೆಯುತ್ತಿದ್ದೇನೆ ಮತ್ತು
ಈ ಬರಹಕ್ಕೆ ನಾನೆ ಹೊಣೆಗಾರನಾಗಿರುತ್ತೇನೆ...
ರಾಮ...
ಕೈಕೆಯ ಮಗನ ಸಿಂಹಾಸನದ ಮೋಹದಾಸೆಗಾಗಿ
ದಶರಥನಿತ್ತ ಎರಡು ವರವ ಸದ್ವಿನಿಯೋಗಪಡಿಸಿಕೊಂಡಳವಳು ಪಟ್ಟಗಟ್ಟುವಲ್ಲಿ
ಮದುವೆಯ ಹೊಸತನದ ಸವಿಯ ಸೀತೆಯ
ಜತೆ ಸವಿಯಬೇಕೆಂದಾಗಲೆ.. ಮಲತಾಯಿಯ
ವಚನಕ್ಕೆ ಸೋತ ತಂದೆಯ ಮಾತಿಗೆ ನಡೆದನವನು
ಕಾಡಿಗೆ... ಕೈಕೆಯ ಮನದ ಮೋಸಕೆ ಎಲ್ಲ ಸುಖವನಿದ್ದೂ
ಕಾನನ ವಾಸಕೆ ನವದಂಪತಿಗಳು ನಡೆದರೆ ಅಣ್ಙನಿಲ್ಲದೆ
ನಾನಿಲ್ಲ ಎಂದ ಲಕ್ಷ್ಮಣ ಉತ್ತರಕ್ಕೆ.. ಇದಾವುದರ ಪರಿವೆಯೆ
ಇಲ್ಲದ ಊರ್ಮಿಳೆಗೆ ಗಂಡನಿಲ್ಲದ ವನವಾಸ ನರಕದರಮನೆಯ ಸೆರೆವಾಸ..
ಶೂರ್ಪನಖಿಯು ಕಾಮದಾಸೆಗಾಗಿ ನಖವ ಕತ್ತರಿಸಿಕೊಂಡಳು
ಲಕ್ಷ್ಮಣನಿಂದ.. ಇದರ ಸೇಡಿನ ಕಾವಿಗಾಗಿ ಬಂದ
ರಾವಣನು ಹೊತ್ತೊಯ್ದುದ್ದು ಸೀತೆಯನು.. ಎಲ್ಲ
ಬಿಟ್ಟು ಬಂದು ಕಾನನದಲ್ಲಾದರೂ ಬಾಳ ಸವಿಯ ಸವಿಯಬಹುದೆಂದಿದ್ದ ರಾಮನಿಗೆ ಇಲ್ಲೂ ಅವಳಗಲಿಕೆಯ
ಆಘಾತ.. ಮನಮೆಚ್ಚಿದ ಮಡದಿ ಇನ್ನೊಬ್ಬರ ಬಂಧನದಲ್ಲಿರಲು ಯಾರು ಅರಿಯರು ಅವನ ಮನದ
ತಳಮಳವ..
ರಾಜನಾಗಿ.. ರಾಜಧರ್ಮವ ನಿಭಾಯಿಸಲು ಮಡದಿಯನ್ನು
ಕಾಡಿಗೆ ಕಳುಹಿಸಿದನು.. ಒಬ್ಬಳನ್ನ ಕಾಡು ಮೃಗಗಳಿರುವ
ಭೀಕರ ಅರಣ್ಯಕ್ಕೆ ಕಳುಹಿಸಿ ಹೇಗಿದ್ದನೊ ಅವಳಿಲ್ಲದ ವಿರಹವ ಸಹಿಸಿಕೊಂಡು..
ಬುದ್ಧ...
ಸದಾ ಸುಖದ ಸುಪ್ಪತ್ತಿಗೆಯಲ್ಲಿ ತೇಲಾಡಿದ ರಾಜನು
ಮುದಿತನ.. ರೋಗಗ್ರಸ್ಥ.. ಸಾವನ್ನು ಕಂಡು ವೈರಾಗಿಯಾದವನು ಇವನ ಬದುಕಿನಲ್ಲಿ ಹೆಣ್ಣು ಹೊನ್ನು ಮಣ್ಣು ಕೇವಲ ಇವನಿಗೆ ವೈರಾಗ್ಯ ತೋರಲು ನೆಪವಾದವುಗಳಷ್ಟೇ.. ವಿಶ್ವಕ್ಕೆ ಶಾಂತಿಯ ಮಂತ್ರವ
ಸಾರಿದನವನು ಬುದ್ದಿಯಿಲ್ಲದವರಿಗೆ ಬೌದ್ಧಿಕ ಬುದ್ದಿಯ
ಸಾರುವಂತವನಾದವನು
ಬಸವಣ್ಣ...
ಇವನ ಕ್ರಾಂತಿ ಬಂಡಾಯವೆದ್ದಿದ್ದೆ ಮನೆಯಂಗಳದಿಂದ
ಅವನಕ್ಕಳಿಗೂ ಉಪನಯನವ ಮಾಡದಿದ್ದಾಗ ಸಿಡಿದೆದ್ದವ
ಮೊದಲು ಮಹಿಳೆಯರಿಗೆ ಸಮಾಜದಲ್ಲಿ ಗಂಡಸಿಗೆ
ಸಮಾನವಾದ ಸ್ಥಾನಮಾನವ ದೊರಕಿಸಿಕೊಟ್ಟವ..
ಪ್ರತಿಯೊಂದು ಹೆಣ್ಣಿನಲ್ಲೂ ತಾಯಿ ರೂಪವ ಕಂಡವನು
ಇಬ್ಬರು ಸತಿಯರನ್ನು ಎರಡು ಕಣ್ಣುಗಳಂತೆ ಕಂಡವನು
ವಚನ ಸಾಹಿತ್ಯದಲ್ಲಿ ಮಹಿಳೆಯರನ್ನು ಗುರುತಿಸಿ ಅಕ್ಷರ
ಜ್ಞಾನದಿಂದ.. ಕಾಯಕದ ಕಾರ್ಯದಿಂದ ಎತ್ತಿ ಹಿಡಿದವನು
ಮಹಾ ಮಾನವತಾವಾದಿಯಾದವನು ಬಸವಣ್ಣ..
ಈ ತ್ರಿವಳಿಗಳು ಆಯಾ ಕಾಲಕ್ಕೆ.. ತಕ್ಕಂತೆ ಬದುಕಿನ
ವಿರುದ್ಧ ಹೋರಾಡಿದವರೆ ಜಗದಲಿ ತುಂಬಿದ
ಅಜ್ಞಾನ ಮತ್ತು ಕಾಮದ ವಿರುದ್ದ ಹೋರಾಡಿದವರೆ
ಇನ್ನೂ ಇವರು ಮೂವರಲ್ಲಿ ನಿಮಗೆ ಹಿತವರಾರು
ಎಂದೊಡೆ ನಾನೇನ ಹೇಳಲಿ... ಕಳಕಮಲ್ಲಯ್ಯ..
No comments:
Post a Comment