ಬಸವಣ್ಣ ಜನಿಸಿದ ನಾಡಿನಲ್ಲೂ..
ಗುಡಿ ಗುಂಡಾರಗಳಲ್ಲಿ..
ನಮ್ಮ ಭಕ್ತಿ ಭಾವಗಳಿಗೆ ನಾವು
ತುಂಬಬೇಕು ಸುಂಕ..ಕಾರಣ
ಮನದಲ್ಲಿದೆಯಲ್ಲ ಭಯದ ಭಕ್ತಿ..
ಎನ್ನ ಕಾಲೆ ಕಂಬ ಎನ್ನ ದೇಹವೆ
ದೇಗುಲ ಎಂದವರ ಭೂಮಿಯಲ್ಲೂ
ಸರತಿ ಸಾಲುಗಳಲಿ ನಿಂತು.. ದರುಶನಕೆ
ತಾಸುಗಟ್ಟಲೆ ಕಾದು ಅವನ ದರುಶನಕ್ಕೆ
ಬಂದರೆ ನೋಡಿಯು ನೋಡಿಸದ ಹಾಗೆ
ದಬ್ಬಿ ಬಿಡುವರ ಆಚಾರಿಗಳು.. ಏಕ್ಹೇಳಿ
ನಮ್ಮ ಹಾಗೆ ಹಿಂದೆ ಭಯವ ತುಂಬಿದ
ಭಕ್ತರಿರುವರಲ್ಲ...
ದೇವರಿಗೆ ಹಣದಾಸೆ ಇದೆಯೊ.. ಇಲ್ಲವೊ
ಮನುಷ್ಯರಿಗಂತೂ ಇದೆ.. ಅರ್ಚಕರು ಕಾಮ
ಕ್ರೋಧ..ಲೋಭ..ಮೋಹ..ಮದ..ಮತ್ಸರ
ಇನ್ನೊಂದು ಮಗದೊಂದು ಹೊಂದಿರುವ
ಮನುಷ್ಯರಲ್ಲವೆ...
ದೇವಸ್ಥಾನದ ಆವರಣದಲ್ಲಿ ಇಂತಹ
ಅರ್ಚಕರನ್ನು ಸೃಷ್ಟಿಸುವುದೆ ನಮ್ಮಂತಹ
ಭಕ್ತರು.. ಊರಲ್ಲಿ ಮಾಡಿದ ಪಾಪ
ಕಾರ್ಯಗಳಿಗೆ ಅವರು ಪಡೆಯುವರು
ಪೂಜೆಯ ನೆಪದಲ್ಲಿ ತೆರಿಗೆ.. ಯಾಕೆಂತ
ನಮ್ಮ ನಮ್ಮ ಅಂತರಾಳಗಳಿಗೆ ಗೊತ್ತಿರುವುದಲ್ಲ
ಎಲ್ಲ ಭಾವಗಳಲೂ ಬೇರೆತುಕೊಂಡಿದೆ
ಹಣದ ಭಾವ..ಎಲ್ಲರ ಮೊಗದಲ್ಲೂ
ತಳಕು ಹಾಕಿದೆ ಹಣವೆಂಬ ನಿರ್ಭಾವ
ಹಣವಿದ್ದರೆ ಪಾಪಗಳ ಮುಕ್ತಿ..ಮರಳಿ
ಹಣವ ಗಳಿಸಲು ಪಾಪಗಳ ಸುರುಳಿ
ಹಣಕ್ಕೂ ಪಾಪಕ್ಕೂ ಸುರುಳಿ ಸುರುಳಿ
ಹೋಗಬೇಕಲ್ಲ ನಮ್ಮ ಪಾಪಗಳ
ಕಳೆಯಲು ನಾವು ಹೊರಳಿ ಹೊರಳಿ
ನಾವು ಎಚ್ಚೆತ್ತುಕೊಳ್ಳುವುದಾದರೂ ಯಾವಾಗ?
No comments:
Post a Comment