Friday, May 26, 2017

ಏನಾಗಿದೆ ಮನಸೆ..

ಏನಾಗಿದೆಯೊ... ನಿನಗೆ ಮನಸೆ
ಮತ್ತೆ... ಮತ್ತೆ.. ಅವಳ ನೆನಪುಗಳ
ಕೊಳದಲ್ಲಿ ಜಿಗಿಯುವದೇಕೆ..ಈಜುವುದೇಕೆ..
ಎದ್ದು ಬಂದು ಬಿಡು ಸಾಕು....ಅದಲ್ಲ
ಒಲವಿನ ವರತೆ...

ಅವಳ ನೆನಪಿನ ಹೂಳನ್ನು
ಎಷ್ಟೇ....ಎತ್ತಿ ಹೊರಹಾಕಿದರೂ...
ಕಳೆದ ದಿನಗಳ ನೋವಿನ ನೀರು
ಮತ್ತೆ ಜಿನಗುವುದಲ್ಲ....ದುಃಖದ
ಮಡುವದು ಮತ್ತೆ ತುಂಬುವದಲ್ಲ..
ಅವಳಿಲ್ಲ ಇನ್ನೂ ನನ್ನ ಬಾಳಲ್ಲಿ ಎನ್ನುವ
ಹೂಳು ಹೊರಳಿ.. ಮರಳಿ.. ತುಂಬಿ
ಬರುವುದಲ್ಲ..

ನೆನಪೆ ಏಕೆ ಮನದ ನೆತ್ತಿಯ
ಹತ್ತಿ ಕುಳಿತಿರುವೆ..
ಇಳಿದು ಬಾ ಸಾಕಿನ್ನು.... ಅವಳಿಗೆಂದೆ
ಎಷ್ಟೆಂದು ಸುರಿಸಲಿ ಕಣ್ಣೀರನು..
ತರಿಸಬೇಕಿದೆ.. ಅವಳ ಮರೆವೆಂಬ
ಮಳೆಯ ಹನಿಗಳನು... ಹರಿಸಬೇಕಿದೆ
ಮನದಿಂದ ವಿರಹದ ಕಾಲುವೆಯನು..
ಹಿಡಿದಿಡಬೇಕಿದೆ....ನವ ಬಾಳಿನ
ಚೈತನ್ಯವನು...ಚಿಮ್ಮಿಸಬೇಕಿದೆ
ಮತ್ತೆ ಬದುಕಿನ ಚಿಲುಮೆಯನು

No comments:

Post a Comment