Tuesday, May 9, 2017

ಶರಣೆನ್ನಲೆ ಬೇಕು..

ಗೆಳತಿ
ನಿನ್ನ ಮೌನಕ್ಕಿಂತ
ಆಗಾಗ ನೀ ಬಿರುವ
ಹೂ ನಗುವೆ ತಣಿಸುವುದೆನ್ನ...
ಮನವ

ನನ್ನ ಸೋಲಿನ ದಿನಗಳಲಿ..
ಕೈ ಬಿಟ್ಟವರದೇಷ್ಟಿಲ್ಲ ಮಂದಿ
ಎಷ್ಟು ಬಲವ ತುಂಬಿಲ್ಲ ನೀನು
ಕುಳಿತಾಗ ನಾನು ಬಲಕುಂದಿ

ನಾ ಹೊರಟು ನಿಂತಾಗ ಕೆಲಸಕ್ಕೆ....
ಪ್ರೇಮದ ಮಾತುಗಳ ತುಂಬಿ ನೀ...
ಕೊಡುವ ಕರ್ಚಿಪು... ನನ್ನ ಹಣೆಯ
ಬೆವರಿನ ಜೊತೆ ಅದೇಷ್ಟು ಮಾತಾಡುತ್ತಿತ್ತು..

ಹುಸಿ ಮುನಿಸು ತೋರಿ..
ಒರಗಿ ನಿಂತಿರಲು ಬಾಗಿಲಿಗೆ
ನಾ ತಂದ ಸಂಜೆ ಮಲ್ಲಿಗೆ ಮುಡಿದು
ನೀ ತೋರಿದ್ದು..... ಅದೆಂತ ನಾಚಿಕೆ

ಸಂಜೆಯ ಚಹಾಕ್ಕೆ ನಿನ್ನಧರದ ಸವಿಯ
ತುಂಬಿ ಕೊಟ್ಟಾಗ... ನಾ ಕುಡಿದು ಒಂಚೂರು
ಕಣ್ಮುಚ್ಚಿ ಕುಳಿತಿರಲು... ಕೋಮಲ ಕೈಗಳೆರಡು
ಹಣೆಯ ಒತ್ತುತಿರಲು... ಆ ಸರ್ವಜ್ಞನಿಗೆ
ಶರಣೆನ್ನಲೆ.... ಬೇಕು..

No comments:

Post a Comment