Wednesday, May 24, 2017

ನಾರಿ ಒಲಿದರೆ

ಇದೊಂದು ಜಠಿಲವಾದ...
ಎಂದೂ ಬಗೆಹರಿಯದ..ಇತ್ಯರ್ಥವೆ
ಕಾಣದಂತಹ ಬಹುದೊಡ್ಡ ಸಮಸ್ಯೆ

ಅವಳಂದಕೆ ಹೋರಾಡಿದವರು..
ಕಳೆದುಕೊಂಡರು ಪ್ರಾಣವನು...ಅಳಿಸಿ
ನಿರ್ನಾಮವಾಗಿ ಹೋದವು ಸಾಮ್ರಾಜ್ಯಗಳು
ಎಷ್ಟೊ... ಅಮಾಯಕ ಸೈನಿಕರ ನೆತ್ತರಿನ
ಕಾಲುವೆಗಳೆ ಹರಿದುಬಿಟ್ಟವು... ಲೆಕ್ಕವಿಲ್ಲದಷ್ಟು
ಸಿಂಧೂರದ ಹಣೆಗಳು ಬಂಡೆಯಾಗಿಬಿಟ್ಟವು..
ಸ್ನೇಹಿತನ ಹೊಟ್ಟೆಯನೆ ಸೀಳಿಬಿಟ್ಟವು ಚಾಕುಗಳು
ಅವಳ ಅಂದದ ಅರಮನೆಯ ಬಯಸಿ..

ಅವಳಂತರಂಗವನರಿತವರು.. ಕಟ್ಟಿದರು
ಅವಳು ಅಳಿದು ಹೋದರು ಅವಳ ನೆನಪು
ಮಾಸದಂತೆ ಬೇಲೂರಿನ ಶಿಲಾಬಾಲಿಕೆಗಳಾಗಿ
ಸ್ನಿಗ್ಧ ಸೌಂದರ್ಯದ ಕುರುಹುವಾಗಿ ತಾಜಮಹಲನು
ರವಿವರ್ಮನ ಚಿತ್ರಪಟಗಳಲಿ... ಚಿತ್ರಿಸಿದರು
ಮೈಸೂರು ಮಲ್ಲಿಗೆಯ ಕಾವ್ಯದಲಿ..
ಬೇಂದ್ರೆಯವರ ಭಾವದ ಸಾಲುಗಳಲಿ
ಕುವೆಂಪುರವರ ಪ್ರೇಮಕಾಶ್ಮೀರದ
ಪುಸ್ತಕದಲಿ ಬರೆದಿಟ್ಟಿರುವರು

ಈ ಇಪ್ಪತ್ತೊಂದನೆ ಶತಮಾನದಲ್ಲಿ...ತಾಂತ್ರಿಕತೆಯ
ಉತ್ತುಂಗದ ಹೊಸ್ತಿಲಲಿ ....ಅವಳ ದಾಸ್ಯವ ಅವಳೆ
ತೊಡೆದುಕೊಳ್ಳಬೇಕು... ಹಾಸ್ಯ ಮಾಡುವ
ಬಾಯಿಗಳ ಮುಚ್ಚಿಸಬೇಕು.. ಮನವನರಿಯದ
ಕಟುಕರೆದೆಯ ಮೇಲೆ ಕಾಳಿಯಂತೆ ನರ್ತಿಸಬೇಕು
ಅವರ ಮನದಲೂ ಪ್ರೀತಿಯ ಗರಿಕೆಯ ಬೆಳೆಸಬೇಕು
ನಾರಿ... ನೀ ಒಲಿದರೆ ನಾರಿ
ಮುನಿದರೆ... ಮಾರಿ ಎಂಬ ನಾಣ್ಣುಡಿಯ
ನಿಜವಾಗಿಸಬೇಕು..

No comments:

Post a Comment