ನಿಜ....
ಮುರಿದು ಮೂಲೆ ಸೇರಿದೆ
ನನ್ನ ಹಾಕಿ ತೂಗಿದ ಕಟ್ಟಿಗೆಯ
ತೊಟ್ಟಿಲು...
ತೂಗಿದ ಕೈಗಳ ಶಕ್ತಿಯಿನ್ನೂ...
ಕುಂದಿಲ್ಲ... ಆ ಕೈ ಬಳೆಗಳ
ನಾದ ನಾನಿನ್ನೂ ಮರೆತಿಲ್ಲ
ಬಾಲ್ಯದ.. ಹರೆಯದ...ಈ
ನಡು ವಯಸ್ಸಿನಲ್ಲೂ...
ಮಾಡಿದ... ಮಾಡುವ..
ತಪ್ಪುಗಳನೆಲ್ಲವ ತಿಳಿಸಿ..
ತಿದ್ದುವ ಗುರುವು ನೀನು ತಾಯೆ...
ಹಗಲಿರುಳು ಬದುಕಿನುದ್ದಕ್ಕೂ ತಾ
ನೋವು ನಲಿವನುಂಡು.... ನಮಗೆ
ಮಾತ್ರ ಸದಾ ನಲಿವನುಣಬಡಿಸಲು
ಚಡಪಡಿಸುವ ಬೆಣ್ಣೆ ಮನಸಿನ...
ಮಾತೆಯೆ...
ನಿನ್ನಾವ ಋಣವ ತೀರಿಸಲು..
ಒಂಬತ್ತು ತಿಂಗಳು ಹೆತ್ತು ಹೊತ್ತಿದುಕೊ...
ಎದೆಹಾಲುಣಿಸಿ... ಲಾಲಿಪಾಲಿ ಹಾಡಿದುಕೊ...
ಎದ್ದರೆ... ಬಿದ್ದರೆ... ಆದ ಗಾಯಗಳಿಗೆ...
ಬಂದ ರೋಗಗಳಿಗೆ ಮಾಡಿದ ಶುಶೃತಕೊ...
ಇಲ್ಲವೆನ್ನದೆ... ನನ್ನೆಲ್ಲ ಬೇಡಿಕೆಗಳ ಅಷ್ಟಾಗದಿದ್ದರೂ..
ಇಷ್ಟಿಷ್ಟಾಗಿ... ಇಡೇರಿಸುತ್ತಿದ್ದುಕೊ...
ಬಾಳಿನ ಪಯಣದಲಿ.... ನೀನಿಲ್ಲವಾದರೆ...
ನಿನ್ನಷ್ಟಲ್ಲದಿದ್ದರೂ... ನಿನ್ನ ಕಾಲು ಭಾಗದಷ್ಟಾದರು
ನನ್ನ ಕಾಯಲು... ಕಾಪಾಡಲು... ಸಲುಹಲು
ಒಬ್ಬ ಮಡದಿಯನ್ನು ಕಟ್ಟಿಕೊಟ್ಟಿದ್ದಕ್ಕೊ...
ಅದೇಷ್ಟು ಜನ್ಮಗಳ ಎತ್ತಿ ಬಂದರೂ...
ಸಾಲದಾದಿತೆ... ನನಗೆ
ದೇವರು ಎಲ್ಲ ಕಡೆಯೂ
ತಾನಿರುವುದಿಲ್ಲ ಎಂದೆ...
ಈ ತಾಯಿ ದೇವರ ಸೃಷ್ಟಿಸಿದ..
ಇಂತಹ ಮಮತೆಯ ಮಡಿಲ
ಸೃಷ್ಟಿಸಿದ ಆ ಸೃಷ್ಟಿಕರ್ತನಿಗೆ
ತಾಯೊಲವ ಸವಿಯನುಂಡ ಮಕ್ಕಳ
ಪರವಾಗಿ...
ತಾಯಿ ಮಡಿಲ ಸುಖವ ಕಾಣದ
ಮಕ್ಕಳಿಗೆ.... ತಾಯಿಯ ಅಂಗಳದ
ಭಾಗ್ಯವ ನೀಡೆಂದು ಬೇಡಿಕೊಳ್ಳುತ್ತಾ
ನಿನಗೆ ಅನಂತ.... ಅನಂತ...
ಪ್ರಣಾಮಗಳು
No comments:
Post a Comment