"ಸ್ಪೂರ್ತಿ"
ನನ್ನಲ್ಲಿರುವ ನೋವು
ನಲಿವಿನ ಕವಿತೆಗಳಿಗೆ
ಗೆಳೆಯನೇ ಸ್ಪೂರ್ತಿ!!
ಕಾರಣ ಅವನೆ ಕೊಟ್ಟು
ಅವನೆ ಕಸಿದು ಕೊಂಡಿರುವ
ಅವನೆದೆಯ ಪ್ರೀತಿ!!
ನಾನು
ನನ್ನೆಲ್ಲ ಮನದ ಸರಸ
ಸಲ್ಲಾಪಗಳ...ಗೀತೆಗಳಿಗೆ
ಅವಳೆ ಕಾರಣ..
ಯಾಕೆ ಗೊತ್ತಾ...
ಸಾಕು ಸಾಕೆಂದರು..
ತುಂಬುತಿಹಳು ಎದೆಯಲಿ..
ಅವಳ ಪ್ರೀತಿಯ ಹೂರಣ..
ಅ
ನನ್ನೆದುರು ನಿಲ್ಲಲು ಧೈರ್ಯ ನಿನಗೆಲ್ಲಿದೆ
ಆಸೆ ಭರವಸೆಯ ತೋರಿಸಿ
ನನ್ನನ್ನೆ ತೊರೆದು ಹೋದವನಲ್ಲವೆ ನೀನು
ನನ್ನ ಕಣ್ಣಲ್ಲಿ ಕಣ್ಣಿಟ್ಟು ನೀನೋಮ್ಮೆ
ನೋಡಿದರೂ ಯಾವ ಹುಸಿ ಪ್ರೀತಿ
ನಿನಗೆ ಕಾಣಿಸದು
ಇಷ್ಟೆಲ್ಲಾ ಆದರೂ ನಿನ್ನನ್ನು
ಪ್ರೀತಿಸಬಾರದೆಂದು ಕೊಂಡರು
ಅಂಕೆ ಇರದ ಮನಸು
ನಿನ್ನನ್ನೇ ಪ್ರೀತಿಸುವುದು
ಕಾರಣ ತಿಳಿಯದು...........?
ನಾ
ನನ್ನ ಧೈರ್ಯದ ಬಗ್ಗೆ ಮಾತನಾಡಬೇಡ
ಹುಡುಗಿ.... ಗೊತ್ತಿಲ್ಲವೆ.. ಸಾವಿರ ಜನರೆದುರು
ನಿನ್ನೆ ಪ್ರೀತಿಸುವೆನೆಂದು ಕೂಗಿ...ಕೂಗಿ..
ಹೇಳಿದ್ದ... ಮರೆತನ ಬೆಡಗಿ..
ನಿನ್ನ ಕಣ್ಣಲೊಮ್ಮೆ ಕಣ್ಣಿಟ್ಟು..
ಆ ನಿನ್ನ ಕಣ್ಣಿಗೆ ಕಟ್ಟಿದ ಪೊರೆಯನು
ಕಿತ್ತು.... ನನ್ನ ಕನಸುಗಳನೆಲ್ಲವ ತುಂಬಬೇಕಿದೆ
ನನ್ನ ಬಿಂಬವನಲ್ಲಿ ಚಿತ್ರಿಸಬೇಕಿದೆ...
ತಿರುಗಿ ನಿಲ್ಲು ಒಮ್ಮೆ... ಹೀಗೆ ಬೆನ್ನು
ಕೊಟ್ಟು ನಿಂತರೆ ಹೇಗೆ ?
ಯಾವತ್ತೂ... ಯಾವುದಕ್ಕೂ... ಈ
ಪ್ರೀತಿಗೆ ಬೆನ್ನು ತೋರಿಸದಿರೆಂದವಳು
ನೀನೆ..... ಹೀಗೆ ಬೆನ್ನು ಕೊಟ್ಡು ನಿಂತರೆ
ನಾನೇನ... ಮಾಡಲಿ....
ಬಿಡು ನಿನ್ನ ಮೊಂಡಾಟವನು...
ತೋರು ನಿನ್ನೊಲವನು....ಹಾಕದಿರು
ಅಂಕೆಯನು... ಮನಸ್ಸಲ್ಲ ನಿನ್ನದು
ಕಲ್ಲುಗುಂಡು.. ನನ್ನೊಲವ ತುಂಬಿರುವ
ಮಲ್ಲಿಗೆಯ ಚೆಂಡು..
ಮಾಡಿಕೊಳ್ಳದಿರು ನಿನಗೆ ನೀನೆ
ಆತ್ಮವಂಚನೆ...
No comments:
Post a Comment