Monday, May 1, 2017

ಕದನ ಜಯಲಕ್ಷ್ಮಿ ೧


ಅಯ್ಯು ಗೆಳೆಯ ಮುಂದಿನ
ಜನ್ಮ ಕಂಡವರು ಯಾರು..
ಈ ಜನ್ಮದಲ್ಲಿ ನಿ ಕೈ ಬಿಟ್ಟು
ಮುಂದಿನ ಜನ್ಮದ ಬಗ್ಗೆ ಹೇಳುವೆಯ..

ಹಾಗದರೆ ನಾ ತಪಸ್ಸು ಮಾಡದೆ ನಿನ್ನ ಪಡೆದನೆ ಹೃದಯದಲ್ಲಿ ಜಾಗ ಕೊಟ್ಟೆನೆ...

ಬಿಡು ಗೆಳೆಯ ಮುಂದಿನ ಜನ್ಮ ಯಾಕೆ..
ಈ ಜನ್ಮದಲ್ಲಿ ಇಲ್ಲದವ ಮುಂದಿನ ಜನ್ಮಕ್ಕೆ ಯಾಕೆ ಬೇಕು..

ಅವಳ ತಪಸ್ಸಿಗೆ ಮೆಚ್ಚಿ ವರವಾಗಿ ಹೊಗಿದ್ದಿಯ ಹೋಗು..
ಮತ್ತೆ ಯಾಕೆ ನನ್ನ ಜೊತೆ ಮಾತು..

ಈ ಜನ್ಮದ ಋಣ ತೀರಿತು ಮುಂದಿನ
ಜನ್ಮದಲ್ಲಿ ಯಾಕೆ ಮತ್ತೆ ಹೀಗೆ ಹರಿಯುಕೆ..

ಬೇಡ ಗೆಳೆಯ ಯಾವ ಜನ್ಮದ ಮಾತು..
ಈ ಜನ್ಮದಲ್ಲಿ ನಿ ಕೊಟ್ಟ ನೆನಪುಗಳು ಸಾಕು..
ಮುಂದಿನ ಏಳೇಳೂ ಜನ್ಮಕ್ಕೆ ಉಂಟು


ಹ್ಹ‌...ಹ್ಹ...
ಯಾಕೋ ನನಗೆ ಯಾರದೊ
ಹೃದಯ ಸುಟ್ಟಿರುವ ವಾಸನೆ ಬರುತ್ತಿದೆ..
ಅದು ನಿನ್ನದಲ್ಲ ತಾನೆ ಸುಶೀಲೆ..
ನೋಡಿದೆಯಾ ಎರಡು ಮಾತಿಗೆ
ಆ ಮೂಗಿನ ಮೇಲಿನ ಕೋಪ
ಹೇಗೆ ಹೆಡೆ ಎತ್ತಿತು...

ಇದೇ ಕಾರಣಕ್ಕಾಗಿ ಅಲ್ಲವೆ ನಮಿಬ್ಬರ
ಮಧ್ಯೆ ವೈಮನಸ್ಸು ಹುಟ್ಟಿದ್ದು...
ಇದನ್ನು ನಾನು ಕಡೆದು ಹಾಕಲು
ನೋಡಿದೆ...
ನೀನು ನೀರು ಹಾಕಿ ಬೆಳಸಿದೆ..

ನಾ ಕೊಟ್ಟ, ಬಿಟ್ಟು ಹೋಗಿರುವ
ನೆನಪುಗಳನಾದರೂ ಜೋಪಾನವಾಗಿಟ್ಟುಕೊ
ನಿನಗೆ ಬೇಡವಾಗಿರಬಹುದು ಮುಂದಿನ
ಜನ್ಮದ ನಮ್ಮಿಬ್ಬರ ಪ್ರೇಮ ಬಂಧನ

ನಾನೆ ಕೋರಿಕೊಳ್ಳುತ್ತೇನೆ ಆ ದೇವರಲ್ಲಿ
ಇವಳಿಗೆ ಮೂಗಿನ ಮೇಲೆ ಕೋಪವಿಲ್ಲದ
ಮೂಗನು ಕೊಟ್ಟು ನನ್ನ ಮನದ ಅರಸಿಯನ್ನಾಗಿಸಯ್ಯ ಎಂದು


ಹ್ಹ ಹ್ಹ
ಯಾವ ಹೃದಯ ಸುಟ್ಟಿಲ್ಲ
ಯಾವ ಹೃದಯ ಅಳುತ್ತಿಲ್ಲ..

ಮತ್ತೋಂಬ್ಬಳ ಹೃದಯ ವಾಸಿ ನಿನು..
ನಿಮ್ಮ ನೆನಪುಗಳನ್ನು ನಿಮ್ಮ ಜೊತೆ
ಹರಿದು ಬಿಡುವೆ..

ನೀವು ಆ ನೆನಪುಗಳನ್ನು ಜೋಪಾನ ಮಾಡಿ ..
ಅ ಹೃದಯ ವಾಸಿ ನೆಲಸಿ...


ಹ್ಹ‌...ಹ್ಹ... ಹ್ಹ...ಹ್ಹ...
ಅಂತು ಇಂತ ಸತ್ಯ ಹೇಗೆ
ಹೊರಗೆ ಬಂತು ನೋಡು
ಮನದನ್ನೆ...

ನಿನ್ನ ಹೃದಯ ಅಳುವುದು ಇಲ್ಲ
ಸುಡುವುದು ಇಲ್ಲ.. ಯಾಕೆ ಹೇಳು..
ಅದು ಕಲ್ಲು ಹೃದಯ...

ನನ್ನನ್ನು ಅಷ್ಟು ಇಷ್ಟ ಪಡುತ್ತಿದ್ದವಳು
ನಿನ್ನ ನೆನಪುಗಳಲ್ಲೆ ಬದುಕುವೆನೆಂದವಳು
ಒಂದು ದಿನವು ಇನ್ನೂ ಆಗಿಲ್ಲ...
ಆಗಲೇ ನನ್ನ ನೆನಪುಗಳು ಹಳೆಯ
ಸರಕುಗಳಾಗಿ ಬಿಟ್ಟವೆ..


ಹ್ಹ ಹ್ಹ
ಬಿಟ್ಟು ಹೋದ ನೆನಪುಗಳನ್ನು
ಹೊತ್ತು ಅಳುವ ಬದಲು..

ಬೇರೆಯವರ ಹೃದಯ ವಾಸಿಯನ್ನು
ನೆನೆಯುವ ಬದಲು..
ಏಕಾಂಗಿ ವಾಸಿ ಯಾಗುವುದು ಒಳಿತು..

ಹೃದಯದಲ್ಲಿ ಜಾಗ ಕೊಡುವುದು ಬೇಡ..
ನೋವು ತಿನ್ನುವುದು ಬೇಡ..

ಮತ್ತೊಬ್ಬರ ಹೃದಯ ವಾಸಿ
ನನಗೆಕೇ ಬೇಕು.
ಅದರ ಬದಲು ಏಕಾಂಗಿ ವಾಸಿ ಮೇಲು...


ಅಷ್ಟು ಬೇಡವಾಗಿಬಿಟ್ಟೇನೆ...
ನೀನಿಲ್ಲದ ಏಕಾಂತ...
ಕವಿಯಾಗಿಸುವುದೊ... ರವಿಯಾಗಿಸುವುದೊ ನನ್ನ
ನಿನಿಲ್ಲದ ಬಾಳು ನರಕ ಎನ್ನುತ್ತಿದ್ದವಳು
ನನ್ನನು ಇನ್ನೊಬ್ಬರ ಮನದ ಅಂಗಳಕೆ ನೂಕಿ..
ಏಕಾಂತ ವಾಸವೆ ವಾಸಿ ಎನ್ನುತಿರುವೆಯಲ್ಲ..
ನಿನಗಿದು ಸರಿಯೆ...?

ನೀನು ಮಾತ್ರ ದೂಡಿ... ನಮ್ಮಿಬ್ಬರ ಪ್ರೀತಿಯ
ನೋವನು ನನಗೆ ಮಾತ್ರ ನೀಡಿ... ಈಗ
ನೋವು ತಿನ್ನುವುದು ಬೇಡವೆಂದರೆ...
ಹೇಗೆ...

ಆ ತಾಯಿ ಕರುಳ ಕರುಣೆ ನಿನಗಿಲ್ಲವಾಯಿತೆ..
ಧರಣಿಯಂತೆ ಒಂಚೂರಾದರು ಕ್ಷಮಾಗುಣ
ನಿನ್ನಲ್ಲಿದ್ದಿದ್ದರೆ...
ನಾನಿಂದು ಇನ್ನೊಬ್ಬರ ಮನದ ಸ್ವತ್ತಾಗುತ್ತಿರಲಿಲ್ಲ.


ನಾನು ಕ್ಷಮಾಯಾದರತ್ರಿ
ಯಾಗಿರುವುದರಿಂದ ನಿನು
ಅವಳ ಮನದಲ್ಲಿ ಹರಿಯುತ್ತಿರುವೆ...

ನನ್ನ ಅರಿವಿಗೆ ಬಾರದ ರೀತಿಯಲ್ಲಿ
ಹರಿದು ಅವಳ ಮನದ ಒಡಯನಾದೆ..

ನಾ ನಿನ್ನ ಹಾಗೆ ಹರಿಯುವ ನೀರು ಅಲ್ಲ..
ಹಾಗಾಗಿ ನಾ ಆಗಿರುವೆ ಏಕಾಂಗಿ..
ನಿನ್ನ ನಾ ಕ್ಷಮಿಸಿ ಅವಳ ಮನದ ಒಡೆಯನ್ನಗಾಗಿ ಮಾಡಿ ಬಿಟ್ಟಿರುವೆ..

ಗೆಳೆಯ ಜಂಭ ಬೇಡ ನಾ ನಿನ್ನ ಕ್ಷಮಿಸಿ ಅವಳ ಹೃದಯದಲ್ಲಿ ಸರಗಾವಾಗಿ ಹರುಯಲು ಬಿಟ್ಟಿರುವೆ..


ಎಷ್ಟೊಂದು ತಪ್ಪು ಕಲ್ಪನೆಗಳ
ಕಟ್ಟಿಕೊಂಡಿರುವೆ ಆ ಮನದಲ್ಲಿ..
ನಿನ್ನರಿವಿಗೆ ಬಾರದ ಹಾಗೆ ನಾ
ಹೇಗೆ ಹರೆದು ಹೋದೆ..

ಕ್ಷಮಿಸಲು ನಾ ಮಾಡಿರುವ
ತಪ್ಪಾದರೂ ಏನು ?
ಹರಿವ ಒಲವನು ಹಿಡಿದಿಡದೆ...
ತಿರುಗಿಸಿಬಿಟ್ಟೆ ಸರಕಾರಿ ನಲ್ಲಿಯಂತೆ
ಹರಿದು ಹರಿದು ಕೊಳೆಯನು
ಸೇರಲೆಂದು...

ಜಂಭದ ಕೋಳಿ ನೀನು...
ಬಿಂಕದ ಬೆಡಗಿ ನೀನು
ನನ್ನ ಕ್ಷಮಿಸುವುದೆಂತು
ಮೊದಲು ನಿನ್ನ ನಿ ಅರಿತುಕೊ..
ನಿನ್ನ ನೀ ಅರಿತಿದ್ದರೆ.. ಹೀಗೆ
ಇನ್ನೊಬ್ಬರ ಮನಕೆ ಹರೆಯುವ
ಪ್ರಮೇಯೆ ಬರುತ್ತಿರಲಿಲ್ಲ..


ಅರೆಯದ ಹೃದಯದಲ್ಲಿ
ಮನೆಯ ಮಾಡಿ..
ಅರಿಯದೆ ಹೋಗಿದ್ದು ತಪ್ಪು ಅಲ್ಲವೇ...

ನಾ ಮಾಡಿದ ಮೋಸವಾದರು ಏನೂ.
ನನ್ನ ಪ್ರೀತಿಯಲ್ಲಿ ನಿನಗೆ ಕಂಡ
ಕೊರತೆಯಾದರು ಏನೂ..

ಅವಳ ಮನದಲ್ಲಿ ನಿನಗೆ ಸಿಕ್ಕಿದ್ದದರು ಏನೂ..
ಹೋಗು ಗೆಳೆಯ ನಿ ನನ್ನ ಮನ ಮರಿದು ಹರಿದು ಹೋದೆ...

ನಾ ಜಂಭದ ಕೋಳಿ ಅಲ್ಲ ಗೆಳೆಯ..
ನಿನ್ನ ಕಳೆದುಕೊಂಡ ಖಾಲಿ ಹೃದಯದವಳು..

ಏಕಾಂಗಿ ಯಾಗಿ ನಿ ಆಡುತ್ತಿರುವ ಮಾತುಗಳನ್ನು ಕೇಳುತ್ತಿರುವವಳು..

ನಾ ಮಾಡಿದ ಮೋಸ ವಾದರು ಏನೂ..
ನಾ ಮಾಡಿದ ಅನ್ಯಾಯ ವಾದರು ಏನೂ..

ಅಷ್ಟಕ್ಕೂ ನಿ ಬೇರೆಯ ಮನದಲ್ಲಿ ಹರಿಯುತ್ತಿರುವ ನೀರು..
ನಿನ್ನ ನೆನೆಯುವುದು ಮಹಾ ಪಾಪ..

ನಾ ಏಕಾಂಗಿಯಾಗಿ ಇರುವೆ ಬಿಡು ಗೆಳೆಯ


ಅದು ಅರೆಯದ ಹೃದಯವಲ್ಲ..
ಮರೆಯದ ಹೃದಯ..
ನೊಂದ ಮನಸ್ಸಿಗೆ ಸಂಜೀವಿನಿಯಾದ
ಜೀವ..

ನಿನ್ನ ಮನವ ನಾನೇಕೆ ಮುರಿಯಲಿ
ನಿನಾಗಿಯೆ ಕೋಟೆಯ ಬಾಗಿಲನು
ತೆರೆದು ಬಿಟ್ಟೆಯಲ್ಲ..

ನಿ ನೊಂದಿಸಿ ದೂಡಿದ ಮನಕೆ
ನೆಮ್ಮದಿ ನೀಡಿದ ಗುಡಿಯದು

ಹತ್ತಿ ಹುಳು ತನ್ನ ಸುತ್ತ ತಾ ಹತ್ತಿಯ
ಗೂಡನು ಕಟ್ಟಿಕೊಂಡು ಸಾಯುವ ಹಾಗೆ..
ಮನ ತುಂಬಿದ ನನ್ನನು...
ಬೇರೊಬ್ಬರ ಕಾಲುವೆಗೆ ಹರಿಸಿ..
ಮನವ ಬರಿದು ಮಾಡಿಕೊಂಡು.
ಸಾಯುವ ಮುನ್ನ ಹತ್ತಿ ಹುಳುವಿನ
ವೇದನೆಯನ್ನ ನೀನಿಗ ಅನುಭವಿಸುತ್ತಿರುವೆ.

ನೀನೆನೊ ಏಕಾಂಗಿಯಾಗಿರುವೆ ಎಂದು
ಇಷ್ಟು ಸರಳವಾಗಿ ಹೇಳುತ್ತಿರುವೆ..
ನಾ ಅವಳ ಮನದಲಿದ್ದರೂ...
ನನ್ನ ಮನವದು ನಿನ್ನ ಚಿಂತೆಯಲ್ಲೆ
ಬೆಯುತಿದೆ.


ಗೆಳೆಯ ನಾ ಬಿಟ್ಟೆ ಅಂದೆಯಲ್ಲ.
ಅವಳು ನಿನ್ನ ಮನದಲ್ಲಿ ಬಂದಿದ್ದು
ನನಗೆ ಗೊತ್ತೆಯಿಲ್ಲ..
ನಿ ಯೆಂದು ನನ್ನ ಮುಂದೆ ಪ್ರಸ್ತಾಪಿಸಿಲಿಲ್ಲ...

ನಾ ನಿನ್ನ ಹೇಗೆ ಅನುಮಾನಿಸಲಿ..
ಬಿಟ್ಟೆ ನಿನ್ನ ನನ್ನ ಮನದಲ್ಲಿ ಹರಿಯುವ
ನನ್ನ ಹೃದಯದ ಒಡೆಯನೆಂದು..

ನಿ ಅವಳ ಜೊತೆ ಹೋಗುವ ಮುನ್ನ
ನನ್ನ ಸಮ್ಮತಿಯನ್ನು ನಿ ಪಡೆಯಲೇ ಇಲ್ಲ...

ಹತ್ತಿ ಹುಳು ನಾನು..
ನಿನ್ನ ಮಡಿಲಲ್ಲಿ ಬೆಚ್ಚಗೆ ಇದ್ದವಳನ್ನು
ಹೊರಹಾಕಿ ತಿರಗಿಯು ನೋಡದೆ
ಹೊರ ಹರಿದವನು ನೀನು...

ಎಷ್ಟೇ ಅದರು ನಿನು ಅವಳ ಮನದಲ್ಲಿ
ಹರಿಯುತ್ತಿರುವವನು..
ನಿನಗೆಗೆ ನನ್ನ ಚಂತೆ..
ಹೋಗುವಾಗ ಇರದ ಚಿಂತೆ ಇಂದು ಯಾಕೆ...

ನಿನಗೆ ಗೊತ್ತಿಲ್ಲದ್ದೇನಿದೆ ಗೆಳತಿ
ನೀನು ನನ್ನ ಕೈ ಬಿಟ್ಟ ಕ್ಷಣ..
ಎಷ್ಟು ಬೇಡಿಕೊಳ್ಳಲಿಲ್ಲ ನಿನ್ನನು..
ಆದರೂ ಕರಗಲಿಲ್ಲ ನಿನ್ನ ಹೃದಯ 

ಅವಳ ಮನದ ಮನೆಗೆ ಹೋಗಲು
ನಿನ್ನ ಸಮ್ಮತಿ ನನಗೇಕೆ ಬೇಕು..
ನಮ್ಮ ಪ್ರೇಮ ಬಂಧನಕೆ ಮೊದಲೆ
ವಿಚ್ಛೇದನವನ್ನು ಕೊಟ್ಟುಬಿಟ್ಟಿದ್ದಿಯಲ್ಲ.

ನಿನ್ನ ಮನದ ಗುಂಡಿಗೆಯಲಿ ಎಷ್ಟು
ತಿಳಿಯಾಗಿದ್ದೆ ನಾನು..
ಕೊಳೆಮಾಡಿ ಹೊರ ಹರಿಯಬಿಟ್ಟೆ
ಮತ್ತೆ ನನ್ನನು ತಿಳಿಯಾಗಿಸಿ...
ಒಳ ಬಿಟ್ಟುಕೊಂಡಳವಳು ಸುಮತಿ..


ಇನ್ನೂ ಅದೆಷ್ಟು ಅಪವಾದ ಹೋರಿಸಬೇಕು ಹೋರಿಸು ಗೆಳೆಯ
ನಾ ಏನೂ ಮಾಡಲಿ ನಾನು ಎಂದು
ನಿನ್ನ ಹೊರ ಹಾಕಿದವಳಲ್ಲ...

ನನ್ನ ಹೃದಯದ ಗರ್ಭಗುಡಿಯಲ್ಲಿ
ನಿನ್ನ ಪೂಜಿಸಿದವಳು ನಾನು..
ನಿ ನಿನ್ನ ಇಚ್ಛೆಯಂತೆ ಹರಿದವನು ನಿನು


ನನ್ನನಷ್ಟು ಕಟುಕನೆಂದು ಕೊಂಡೆಯಾ...
ಅಗಸನ ಅಪವಾದಕೆ ರಾಮನು ಸೀತೆಯನ್ನು
ಕಾಡಿಗೆ ಅಟ್ಟಿದಂತೆ..
ಅವರಿವರ ಮಾತು ಕಟ್ಟಿಕೊಂಡು
ವಿರಹದ ಕಾನನಕ್ಕೆ ನೂಕಿಬಿಟ್ಟೆ ನನ್ನನು

ಮನದ ಬನದ ದೇವತೆಯು ನೀನು
ನನ್ನೊಲವ ಉಸಿರ ಬಲವು ನೀನು
ಕೂಗಿ ನೋಡು ಒಮ್ಮೆ..
ದುಂಬಿಯಂತೆ ಹಾರಿ ಬರುವೆ
ನಿನ್ನೆದೆಗೆ


ಬೇಡ ಎಂದು ಹೋದವರನ್ನು
ನಾ ಕೂಗಲಾರೆ..
ಬಲವಂತದ ಪ್ರೀತಿ ನಾ ಪಡೆಯಲಾರೆ ಗೆಳೆಯ...

ಬೇಡ ಎಂದು ಹೋಗಿದ್ದು ನಿನ್ನ ಇಚ್ಛೆ
ಬೇಕು ಎಂದು ಬರುವುದು ನಿನ್ನ ಇಚ್ಛೆ.

ಈ ಎರಡೂ ನನ್ನ ಇಚ್ಛೆ ಯಾಗಿರಲಿಲ್ಲ ಗೆಳೆಯ..
ಮತ್ತೊಂದು ಹೃದಯವ ಕೊಂದು
ನಾ ಮರಳಿ ನಿನ್ನ ಪಡೆಯಲಾರೆ

ಪಡೆಯುವ ಭಾಗ್ಯ ಇನ್ನೇಲ್ಲಿ..
ಕಳೆದು ಹೋದ ಮುತ್ತು ನಾನು
ನಿನ್ನ ಪಾಲಿಗೆ..

ಬಲವಂತವಾಗಿ ನನ್ನನು...
ಇರುಳ ಕಂಡ ಬಾವಿಗೆ ಹಗಲಿನಲ್ಲಿ
ಬಿದ್ದರಂತೆ ಎಂಬಂತೆ...
ಹಗಲಿರುಳು ಅನುಭವಿಸಿದ ಪ್ರೀತಿಯನು
ಮುಸ್ಸಂಜೆಯಲಿ ಮನದಿಂದ ಹೊರದೂಡಿಬಿಟ್ಟೆಯಲ್ಲ...

ಒಂದು ಹೃದಯವ ಕೊಂದ ನಿನಗೆ
ಇನ್ನೊಂದು ಹೃದಯವ ಕೊಲ್ಲುವುದು
ಕಷ್ಟವಾಗಲಾರದೇನೊ..


ಆ ಕೆಲಸ ನಿನ್ನದು ಗೆಳೆಯ
ನನ್ನದಲ್ಲ..
ನಾನು ಏಕಾಂಗಿ..
ನಿನು ಹರಿಯುವ ನೀರು..

ಬಣ್ಣ ಬಣ್ಣದ ಹೂವಿಗೆ ಹಾರುವ ದುಂಬಿ ನಿನು..

ನನ್ನ ನಿ ಬಿಟ್ಟು ಹೋಗಿ ಮತ್ತೆ ಬರುವೆ
ಅನ್ನವೇ ಅಲ್ಲ..
ಮತ್ತೆ ನಿ ಹಾರಿದರೆ ನಾ ಏನೂ ಮಾಡಬೇಕು..

ನಿನ್ನ ಹತ್ತಿರ ಕೊಲೆ ಮಾಡಿಸಿಕೊಳ್ಳಲು
ನನ್ನ ಬಳಿ ಮತ್ತೊಂದು ಹೃದಯ ವಿಲ್ಲ..

ಇದ್ದ ಹೃದಯ ಕೊಂದ ಕೊಲೆಗಾರ ನಿ


ಆ ಒಂದು ಹೃದಯವಾದರೂ
ಬದುಕಿತ್ತು ಯಾವಾಗ..
ನನ್ನ ಮನಸಿನ ಭಾವಗಳಿಗೆ
ಮಿಡಿಯದೆ ನಿಂತು ಹೋಗಿತ್ತು
ಯಾವಾಗಲೊ...

ಬಣ್ಣ ಬಣ್ಣದ ಹೂವಿಗೆ ಹಾರುವವನು
ನಾನಾಗಿದ್ದರೆ..
ನಿನ್ನೆದೆಯ ಮಕರಂದವ ಹೀರಿ..
ನಿನ್ನತ್ತ ಹೊಳ್ಳಿ ನೋಡದಂತೆ ಹಾರಿಬಿಡುತ್ತಿದ್ದೆ..

ನಾನು ನಿನ್ನೆದೆಯ ನೋವಿಗೆ
ಮಿಡಿಯುವ ವೀಣೆ ನಾನು..
ನೋವಿನ ರಾಗವ..
ಒಲವಿನ ಗೀತೆಯಾಗಿಸುವವನು..
ನಾನು ನಿನ್ನವನು..


ಹೌದ ಗೆಳೆಯ.
ಹಾಗಾದರೆ ನನ್ನ ಮನ ತೋರದೆ
ಯಾಕೆ..

ನೀ ನನ್ನ ಕೇಳದೆ ನನ್ನ ಬಳಿ
ಬರಬಹುದ್ದಿತ್ತು ಅಲ್ಲವ..

ಮಕರಂದ ಹಿರಿ ಹಾರಿ ಹೋಗಲು
ಮನಸ್ಸು ಇಲ್ಲದಾಗ
ಬೇರೆ ಮನಸ್ಸಿನಲ್ಲಿ ಮನೆ ಮಾಡಿದ್ದು ಯಾಕೆ..

ನಿನ್ನ ಮನಸ್ದಿನ ಭಾವನೆಗಳನ್ನು
ನನ್ನ ಭಾವನೆ ಅಂತ ತಿಳಿದಿದ್ದು ತಪ್ಪಾ..

ಅವಳ ಮನದಲ್ಲಿ ಹೇಗೋ ಜಾಗವ
ಪಡೆದು ಅಯಿತ್ತಲ್ಲ.
ಬೀಡು ಮತ್ತೆ ಯಾವ ಮಾತು ಬೇಡ..

ನನ್ನ ಪ್ರೀತಿಗೆ ನಿ ಕೊಟ್ಟ ಉಡುಗೊರೆ
ಎಂದು ನಾ ಭವಿಸಿವೆ ಅಷ್ಟೇ ಗೆಳೆಯ...


ನಮ್ಮಿಬ್ಬರ ಪ್ರೀತಿಗೆ..
ವಿರಹದ ಉಡುಗೊರೆಯ
ಕೊಡುವಷ್ಟು ಅರಸಿಕನಲ್ಲ ನಾನು

ಹೇಗೊ ಹಾಗೊ ಅವಳ
ಮನದಲ್ಲಿ ಜಾಗವ ಪಡೆದುದಲ್ಲ
ಅದು ಅವಳಾಗಿಯೆ ನನಗಾಗಿ
ಕಾಯ್ದಿಟ್ಟ ಜಾಗವಾಗಿತ್ತು..

ಇಬ್ಬರ ಭಾವನೆಗಳು ಒಂದೆ
ಆಗಿದ್ದಾಗ ನಿನ್ನ ಮತ್ತು ನನ್ನ
ಅಂಥ ಬೇರ್ಪಡಿಸುವುದಾದರೂ
ಎಲ್ಲಿ...

ಬಿಡು ಬಿಡು ಹುಡುಗಿ..
ಇದು ನಿನ್ನಿಂದಾಗದ ಮಾತು..

No comments:

Post a Comment